Friday, February 26, 2016

ದೇವರ ಆಶೀರ್ವಾದವಾಗಿ ಬೆಳೆಯುವುದೇ ಮರ್ಮ

ಸತ್ಯ ಕೆ ಸಾಟಿಯಿಲ್ಲ, ಮಿಥ್ಯಕ್ಕೆ ಕೊನೆಯಿಲ್ಲ, ಅರಿವಿಗೆ ಜ್ಞಾನವಿಲ್ಲ
ಸುಖಕ್ಕೆ ಅನಂತವಿಲ್ಲ, ಕಷ್ಟಗಳಿಗೆ ಅಂತ್ಯವಿಲ್ಲ, ಇವೆರಡಿಲ್ಲದೆ ಜೀವನವಿಲ್ಲ

ಜ್ಞಾನವೇ ಅರಿವಾಗಿ, ಕರ್ಮಕ್ಕೆ ನಾಂದಿಯಾಗಿ, ಮಾಡಿದಾಗ ಸುಕರ್ಮ
ಕರ್ಮವೇ ಮಾದರಿಯಾಗಿ, ಪ್ರಾಮಾಣಿಕತೆ ಉತ್ಕೃಷ್ಟವಾಗಿ, ಮಾಡೋದೇ ಧರ್ಮ 
ಹೊಸಬೆಳಕಿನ ಹಾಡಾಗಿ, ಜನರ ನಿರೀಕ್ಷೆಯಾಗಿ, ದೇವರ ಆಶೀರ್ವಾದವಾಗಿ ಬೆಳೆಯುವುದೇ ಮರ್ಮ

ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ, ಪಯಣಿಗರು ನಾವೆಲ್ಲಾ
ಆಸೆಗಳ ಈ ಲೋಕದಲ್ಲಿ, ನಿರಾಸೆಗಳ ನಾವು ಮರೆತಲ್ಲಿ, ಜೀವನವೇ ಸುಖ ಪಯಣ ನಮಗೆಲ್ಲಾ!!!

ಜೀವನದ ಈ ದೋಣಿ ಸುಖವಾಗಿ ಸಾಗಲಿ ಅಂತ ಬಯಸುತ್ತಾ
ಎಲ್ಲರಿಗೂ ಇಂದು ಜಯಂತಿಯ ಹಾರ್ದಿಕ ಶುಭಾಶಯಗಳು