Sunday, August 1, 2021

ಸ್ವರ್ಗವಿದೆ ದುಃಖಿಸದಿರಿ



ಒಳ್ಳೆಯ ಮನಸ್ಸಿನಿಂದ ಆತ್ಮೀಯತೆಯೊಂದಿಗೆ ಹೆಣ್ಣು ಮಕ್ಕಳ ಪೋಷಣೆ ಮಾಡಿರಿ *“ಯಾವನು ಮೂವರು ಹೆಣ್ಣು ಮಕ್ಕಳನ್ನು ಅಥವಾ ಮೂವರು ಸೋದರಿಯರನ್ನು ಅವರು ದೊಡ್ಡರಾಗುವ ತನಕ ಹಾಗೂ ಅವರಿಗೆ ನಿಮ್ಮ ಆಶ್ರಯ ಇಲ್ಲವಾಗುವ ತನಕ ಸಾಕಿ ಸಲಹುವನೋ, ಅವರಿಗೆ ವಿದ್ಯೆ, ಬುದ್ದಿಯನ್ನು ಕಲಿಸುವನೋ, ಅವರೊಂದಿಗೆ ಕರುಣೆಯಿಂದ ವರ್ತಿಸುವನೋ ಅವನಿಗೆ ಅಲ್ಲಾಹನು ಸ್ವರ್ಗವನ್ನು ಕಡ್ಡಾಯಗೊಳಿಸುವನು.

 ಪ್ರವಾದಿ ( ಸ ) ಇದನ್ನು ಹೇಳಿದಾಗ ಒಬ್ಬ ವ್ಯಕ್ತಿಗೆ “ಇಬ್ಬರೇ ಇದ್ದರೆ?” ಎಂದು ಪ್ರಶ್ನಿಸಿದಾಗ ಹಾಗೂ “ಒಬ್ಬಳೇ ಇದ್ದರೆ?” ಎಂದೆಲ್ಲಾ ಕೇಳುತ್ತಿದ್ದಾಗಲೂ ಇದೇ ಸುವಾರ್ತೆಯನ್ನು ನೀಡುತ್ತಿದ್ದರು (ಮಿಶ್ಕಾತ್)

 ನಿಮ್ಮ ಮಕ್ಕಳು ಅಲ್ಲಾಹನ ಅನುಗ್ರಹವೆಂದು ಜ್ಞಾಪಿಸಿರಿ, ಗಂಡು ಮಗುವಾದರೆ ಸಂತೋಷ , ಹೆಣ್ಣಾದರೆ ದುಃಖ ಪಡೆಯದಿರಿ. ಕಾರಣ ಅವುಗಳ ಪೈಕಿ ಯಾವುದು ಉತ್ತಮವೆಂಬುದು ಅಲ್ಲಾಹನೇ ಚೆನ್ನಾಗಿ ಬಲ್ಲನು.

“ಯಾರು ಹೆಣ್ಣು ಮಕ್ಕಳ ಜನನ ಮೂಲಕ ಪರೀಕ್ಷಿಸಲ್ಪಡುವರೋ, ಅವರೊಂದಿಗೆ ಉತ್ತಮವಾಗಿ ವ್ಯವಹರಿಸಿ ಆ ಪರೀಕ್ಷೆಯಲ್ಲಿ ಸಫಲರಾಗುವರೋ ಆ ಹೆಣ್ಣು ಮಕ್ಕಳು ನಿರ್ಣಾಯಕ ದಿನದಂದು ಅವರ ಮಟ್ಟಿಗೆ ನರಕಾಗ್ನಿಯಿಂದ ರಕ್ಷಿಸುವ ಗುರಾಣಿಯಾಗಿ ಮಾರ್ಪಡುವರು (ಮಿಶ್ಕಾತ್) 

ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ ನೀಡದೆ ಇಬ್ಬರನ್ನು ಸಮಾನವಾಗಿ ಪ್ರೀತಿಸಿದರೆ ಅಲ್ಲಾಹನು ಸ್ವರ್ಗ ಪ್ರವೇಶ ಮಾಡಿಸುವನು (ಅಬೂದಾವೂದ್)

ಅವರ ಮಗ ಇಬ್ರಾಹಿಂ(ರ) ಸಾವಿನ ಸಂದರ್ಭದಲ್ಲಿ, ಪ್ರವಾದಿ (ಸ) ಅವರ ಮಾತುಗಳು: ನಮ್ಮಕಂಗಳು ಕಣ್ಣೀರಿನಿಂದ ತುಂಬಿವೆ, ಹೃದಯ ದುಃಖದಿಂದ ಭಾರವಾಗಿದೆ, ನೋವಿನಿಂದ ಬೆಂದಿದೆ, ಆದರೆ ನಾವು ನಮ್ಮ ತುಟಿಗಳಿಂದ ಅಲ್ಲಾಹನ ಮೆಚ್ಚುಗೆಯ ಶಬ್ದಗಳ ಹೊರತು ಬೇರೆ ಮಾತುಗಳನ್ನಾಡುವುದಿಲ್ಲ. 

ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊ'ನ್ 

ನಾವು ಅಲ್ಲಾಹನಿಗೆ ಸೇರಿದವರು, ಮತ್ತು ಅವನಲ್ಲಿಯೇ ಹತ್ತಿರವೇ ಮರಳುವುದು


ಅಲ್ಲಾಹನು ನಮ್ಮೆಲ್ಲರ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಎಲ್ಲಾ ವಿಪತ್ತುಗಳಿಂದ ನಮ್ಮನ್ನು ಕಾಪಾಡಲಿ. ಆಮೀನ್

Monday, June 7, 2021

ಸರಳ ಜೀವನ

 

ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಸಂತೋಷ ಪಡಿಸಲು ಹಣ, ಆಸ್ತಿ, ಅಂತಸ್ತು ಬೇಕಾಗಿಲ್ಲ.... ಸಮಯ, ಪ್ರೀತಿ ಮತ್ತು ಒಳ್ಳೆಯ ನಾಲ್ಕು ಮಾತುಗಳು ಸಾಕು. ಸರಳ ಜೀವನ ಸಂಯಮವನ್ನು ಕಲಿಸುತ್ತದೆ; ಸರಳ ವ್ಯಕ್ತಿತ್ವ ಮನುಷ್ಯತ್ವವನ್ನು ಬೆಳೆಸುತ್ತದೆ; ಸರಳ ನಡೆ ನುಡಿ ನಮ್ಮ ಜೀವನವನ್ನು ಉತ್ತುಂಗಕ್ಕೇರಿಸುತ್ತದೆ.....

 

ನಿಮ್ಮ ಜೀವನವು ಸುಂದರವಾಗಿರಲಿ – ಶುಭೋದಯ

Monday, March 1, 2021

ಜಾತಸ್ಯ ಮರಣಂ ಧ್ರುವಂ

ಕುಲ್ಲು ನಫ್ಸಿನ್ ಜಾ'ಯಿಕತುಲ್ ಮೌತ್ 

ಹುಟ್ಟಿದ ಪ್ರತಿಯೊಂದು ಜೀವಿಗೊ ಸಾವು ಖಂಡಿತವಾಗಿ ಬರಲಿದೆ, ಭೂಮಿಯಿಂದ ಪುಣ್ಯ ಅಥವಾ ಪಾಪ ಹೊತ್ತುಕೊಂಡು ಹೋಗುತ್ತೇವೆ, ಅದಕ್ಕೆ ಪುಣ್ಯದ  ಕೆಲಸವನ್ನು ಜಾಸ್ತಿ ಮಾಡಬೇಕು.