ಒಂದು ದಿನ ಒಂದು ತಾಯಿ ಮತ್ತು ಮಗು ಯಾತ್ರೆ
ಹೋಗುತ್ತಿದ್ದರು
ಮಗು ಹಸಿವಿನಿಂದ ಅಳಲು ಪ್ರಾರಂಭಿಸಿತು ಅವರು ಅಲ್ಲೇ
ಪಕ್ಕದಲ್ಲಿದ್ದ ಒಂದು ದೊಡ್ಡ ಹೋಟೆಲ್ ಗೆ ಹೋಗಿ ಒಂದು
ಲೋಟ ಹಾಲು ಕೊಡಿ ಎಂದು ಕೇಳಿದರು
ಹೋಟೆಲ್ ನವ 100 ರೂಪಾಯಿ ಆಗುತ್ತೆ ಎಂದನು
ಆಯ್ತು ಕೊಡಿ ಎಂದು ದುಡ್ಡು ಕೊಟ್ಟು ಹಾಲು
ತಗೊಂಡರು...
ಇನ್ನೊಂದು ದಿನ ಇದೇ ತಾಯಿ ಹಾಗೂ ಮಗು ಯಾತ್ರೆ
ಹೋಗುತ್ತಿದ್ದರು
ಮಗು ಹಸಿವಿನಿಂದ ಅಳಲು ಪ್ರಾರಂಭಿಸಿತು ಅವರು ಅಲ್ಲೆ
ಇದ್ದ ಒಂದು ಸಣ್ಣ ಟೀ ಅಂಗಡಿಗೆ ಹೋಗಿ ಒಂದು ಲೋಟ
ಹಾಲು ಕೇಳಿದರು ಆ ಟೀ ಅಂಗಡಿಯವನು ತುಂಬಾ
ಪ್ರೀತಿಯಿಂದ ಹಾಗೂ ವಾತ್ಸಲ್ಯದಿಂದ ಒಂದು ಲೋಟ
ಹಾಲು ಕೊಟ್ಟನು...
ಆ ತಾಯಿ ಹಾಲಿನ ಬೆಲೆ ಎಷ್ಟು ಅಂತ ಕೇಳಿದರು
ಅದಕ್ಕೆ ಅಂಗಡಿಯವನು, ಮಗು ಕುಡಿದ ಹಾಲಿನ ಬೆಲೆ ನನಗೆ
ಬೇಡ,ಮಕ್ಕಳು ಕುಡಿದ ಹಾಲಿನ ದುಡ್ಡು ನಾನು
ತಗೊಳ್ಳಲ್ಲ...ಹಾಗೂ ಇನ್ನು ಮುಂದಿನ ಯಾತ್ರೆ ಗೆ
ಬೇಕಾದರೆ ನೀವು ಹಾಲು ತಗೊಳ್ಬಹುದು...
ಆ ತಾಯಿಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು
ಹಾಗಾದರೆ ಶ್ರೀಮಂತ ಯಾರು...?
ಒಬ್ಬ ಮನುಷ್ಯನಿಗೆ ಎಷ್ಟು ಸಂಪಾದನೆ ಮಾಡಿದರೆ ಆಸೆ
ಮುಗಿಯಬಹುದು..?
ಯಾರಿಗೆ ಬೇಕಾಗಿ ಇಷ್ಟೆಲ್ಲಾ ಸಂಪಾದನೆ ಮಾಡುತ್ತಾರೆ
...?
ಎಲ್ಲಿಗೆ ತಗೊಂಡು ಹೋಗ್ಲಿಕ್ಕೆ....?
ಸ್ವ ಅವಶ್ಯಕತೆಗಿಂತ ಜಾಸ್ತಿ ಇರುವ ದುಡ್ಡಿಗೆ ಏನು ಬೆಲೆ...?
ಅದರಿಂದ ನೆಮ್ಮದಿ ಇರುತ್ತಾ ...?
ಯಾರೂ ಇಲ್ಲಿ ಬರುವಾಗ ಏನೂ ತಗೊಂಡು ಬಂದಿಲ್ಲ...
ಹೋಗುವಾಗ ಏನೂ ತಗೊಂಡು ಹೋಗುವುದೂ
ಇಲ್ಲ...
ಬನ್ನಿ ನಾವೆಲ್ಲ ಶ್ರೀಮಂತರಾಗೋಣ. ಹಣದ ಶ್ರೀಮಂತಿಕೆ ಕೆಲವರಿಗೆ ಮಾತ್ರ ಸಾಧ್ಯ ಮನದ ಶ್ರೀಮಂತಿಕೆ ಎಲ್ಲರಿಗೂ ಸಾಧ್ಯ. ..ಶುಭೋದಯ
No comments:
Post a Comment